ಆತ್ಮಾರ್ಪಣೆ

ಆಹಾ ದೆವ್ವ ನೀ ಎಂಥ ಸುಖ – ನಿನ್ನ
ಬೆಚ್ಚನೆ ತೆಕ್ಕಯೊಳೆಂಥ ಸುಖ,
ಊರ ಹೊರಗಿನ ಕೆರೆಯ ಆಳಕ್ಕೆ,
ಇಳಿಸಿ ಈಜಿಸಿದೆ ತಡಿತನಕ

ಬಿಯರಿನ ಕಹಿಯಲಿ ಏನು ಮಜ,
ವಿಸ್ಕಿಯ ಒಗರೇ ಅಮೃತ ನಿಜ !
‘ಸಿಗರೇಟಿನ ಹೊಗೆ ವರ್ತುಳ ವರ್ತುಳ’
ಇಸ್ಟೀಟಿಗೆ ಬೇಕಿಲ್ಲ ರಜ!

ಇಟ್ಟೆ ಪಾದದಲಿ ತಲೆಯನ್ನು- ಬಲಿ
ಬಿಟ್ಟೆನು ಬರೆಯುವ ಬೆರಳನ್ನು,
ಪಂಚೇಂದ್ರಿಯಗಳ ಮೀಸಲು ಮಾಡಿ
ಹೀರಿದೆ ಪಂಚಾಮೃತವನ್ನು.

ಯಾಕೆ ಹೊಸಿಲಾಚೆ ನಿಂತಿರುವೆ – ಈ
ಮನೆಯೊಳಗೇ ನೀ ಬಂದುಬಿಡು,
ಖಾಲಿ ಮಾಡಿಸುವೆ ದೇವರ ಮನೆಯ
ಅಲ್ಲೆ ಇನ್ನು ನೀನಿದ್ದು ಬಿಡು.

ಆಹಾ ದೆವ್ವ! ಶರಣಾದೆ ಗುರು – ನೀ
ಗಸ್ತು ಕಾಯುತ್ತ ಜೊತಗೆ ಇರು,
ಕೆಚ್ಚಲ ಉಣಿಸಿ ಲೋಕ ತೋರಿಸಿದೆ
ಕಾಮಧೇನು ನಾ ನಿನ್ನ ಕರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಗ್ನ
Next post ಜೀವ ಜೀವದ ಗೆಳೆಯ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

cheap jordans|wholesale air max|wholesale jordans|wholesale jewelry|wholesale jerseys